ಭ್ರೂಣದ ಮಾತು

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ
ನಮ್ಮಯ ತಪ್ಪಾದ್ರು ಏನು?
ಸ್ತ್ರೀಭ್ರೂಣವಾಗಿದ್ದೆ ತಪ್ಪೇನು??
ನಿಮ್ಮಯ ತೆವಲಿಗೆ ಆಡದ ಮಾತಿಗೆ
ನಮ್ಮಯ ಈ ಬಲಿ ಹಿತವೇನು?

ರೋಗಿಗಳನ್ನು ಉಳಿಸುತ್ತೀರಿ
ನಮ್ಮಯ ಸಾವಿಗೆ ಕಾಯುತ್ತೀರಿ
ಸಂಕಟಕೊ ಇಲ್ಲ ಸಂತಸಕೊ
ಕಡೆಗೆ ಕಂಬನಿ ಹರಿಸುತ್ತೀರಿ
ಅದನೂ ಕೊನೆಗೆ ಮರೆ ಮಾಡುವಿರಿ
ಮುಖವಿಲ್ಲದ ಮಾನವರಾಗುವಿರಿ!

ಕರುಳಿನ ಕುಡಿಗಳ ಸಾವಿಗೆ ಕಾಯುವ
ಮಂದಿಯ ಒಳಗೆ ಕರುಳುಂಟೆ?
ಕರುಳಿನ ನಂಟನು ಬಿಟ್ಟವರೊಂದಿಗೆ
ಕೊರಳಿದ್ದರೂ ಸಹ ಮಾತುಂಟೆ?
ಅನ್ಯಾಯದ ಈ ಜಗವನು ಕಾಣದ
ಪಾಪಾತ್ಮರೋ ನಾವು ಪುಣ್ಯಾತ್ಮರೋ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಿನಾರಿ
Next post ಬೀಳ್ಕೊಡುಗೆ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys